ಪ್ರಶ್ನೆಗಳು

ಎಲ್ಲಿ ನೀನು, ನಿನ್ನೆ ನೆಲೆಯು,
ತಿಳಿವುದೆಂತು ನಿನ್ನೊಳದನಿ,
ಬಣ್ಣವೇರಿ ನಿಂತ ಮೊಗಕೆ,
ಕಾಣಬಹುದೆ ನಿಜ ದನಿ?
ವಿಸ್ತೃತ ಜಗವೆ ಕಿರಿದು ಮಾಡಿ
ಕೀರ್ತಿ ಶಿಖರವೇರಿ ನಿಂತು
ನನ್ನ-ನಿನ್ನ ದೂರಮಾಡಿದೆ,
ಸರಕು-ಸಂಸ್ಕೃತಿ ದಾಳದಲ್ಲಿ
ಏನೆಲ್ಲ ಕಳೇದೀಡಾಡಿದೆ….?
ಬೆಳೆದೆ ಬೆಳೆದೆ ಬರಿದೆ ಬೆಳೆದೆ…?
ಸಣ್ಣ ಸಣ್ಣವನಾಗಿಯುಳಿದೆ…!
ಯಾವ ಕಾರಣ… ನಿನ್ನ ಹರಣ…
ಮಾರಿ ಮಸಣಕೆ ತೋರಣ…!
ತೈಲ ತೀರಿದಾ ಹಣತೆಯಂತೆ…
ದಿನವು ಕಮರಿದೆ ಚಿತೆಯಲಿ
ನಗುವುದೆಂತಿನ್ನು ನೀನು
ಪ್ರೀತಿಸೆಲೆಯ ಬರದಲಿ
ಮಾತೇ ಇರದ ಶೂನ್ಯ ಮುಖದಲಿ

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿದ್ದಿಯಬೇ ಮುದುಕಿ
Next post ಕುಂಬಾರಕಿ ಈಕಿ ಕುಂಬಾರಕಿ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

cheap jordans|wholesale air max|wholesale jordans|wholesale jewelry|wholesale jerseys